Slide
Slide
Slide
previous arrow
next arrow

ಜಾಲಿ ದೇವಿನಗರ ನಾಮಫಲಕ ವಿಚಾರ: ಮೂವರಿಗೆ ಜೀವ ಬೆದರಿಕೆ, ಪ್ರಕರಣ ದಾಖಲು

300x250 AD

ಭಟ್ಕಳ: ಜಾಲಿ ದೇವಿನಗರದ ನಾಮಫಲಕ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಭಟ್ಕಳ ಮೂಲದ ವ್ಯಕ್ತಿಯೋರ್ವ ಜಾಲಿ ಪಟ್ಟಣ ಪಂಚಾಯತ ಸದಸ್ಯನನ್ನು ಸೇರಿ ಇನ್ನಿಬರಿಗೆ ಜೀವ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸದ್ಯ ಆತನ ವಿರುದ್ದ ಪ್ರಕರಣ ದಾಖಲಾಗಿದೆ.

ಮೂವರಿಗೆ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಮುಕ್ತಾರ್ ಮೊಹ್ಮದ ಕುಟ್ಟಿಕೋಡಿ ಜಾಲ ದೇವಿನಗರ ನಿವಾಸಿಯಾಗಿದ್ದಾನೆ.ಭಟ್ಕಳದ ಜಾಲ ದೇವಿನಗರದಲ್ಲಿ ಅನಾದಿಕಾಲದಿಂದಲೂ ಇದ್ದಂತಹ ದೇವಿನಗರ ಎಂಬ ಹೆಸರಿನ ನಾಮಫಲಕವನ್ನು ನವೀಕರಣಗೊಳಿಸಲು ಮುಂದಾದಾಗ ಅನ್ಯ ಕೋಮಿನವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಘಟನೆಗೆ ಸಂಬಂಧಿಸಿದಂತೆ ಮುಕ್ತಾರ್ ಮೊಹಮ್ಮದ ಕುಟ್ಟಿಕೋಡಿ ಎಂಬಾತನು ಪಂಚಾಯತ್ ಸದಸ್ಯ ಸೇರಿದಂತೆ, ಮಹೇಶ ವೆಂಕಟೇಶ ನಾಯ್ಕ, ಹರೀಶ ಕೃಷ್ಣಾ ನಾಯ್ಕ ಇವರ ಹೆಸರು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ತಾನು ಊರಿಗೆ ಬಂದ ಮೇಲೆ ನಿಮ್ಮೆಲ್ಲರ ಮನೆಗೆ ನುಗ್ಗಿ ಹೊಡೆಯುತ್ತೇನೆಂದು ಕೊಲೆ ಬೆದರಿಕೆ ಹಾಕಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈತನ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top